ಧನ್ಯತೆಯ ಕನಸಿಗೆ

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ
ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ
ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”?
ಹೊರಟಿಹೆ ಗಬ್ಬೆದ್ದ ದೇಹ ಮನಸು
ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ-
ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು.
ಪಾಪ ಪ್ರಜ್ಞೆ ಕಾಡಿ ಪ್ರಾಯಶ್ಚಿತ ಬಯಸಿ
ಹೊರಟಿರುವ ಜೋಲು ಮುಖದ
ಕ್ಯಾಮಲೀನಾ ಮೌನಿ
ಮನದೊಳಗೆ ನೂರಾರು ಪ್ರಶ್ನೆಗಳ ಮೂಕಿ.

ಗಂಗೆಯ ಪಾದಕೆ ತಲೆಬಾಗಿಸಿ
ಪುಣ್ಯಭೂಮಿಯ ಮಣ್ಣು ಸ್ಪರ್ಶಿಸಿ
ಧನ್ಯತೆಯ ಭಾವ ಬಯಕೆಯ ಕನಸಿಗೆ
ಸಮಾಧಾನದ ನಾಲ್ಕು ಮಾತು ಮುತ್ತಾಯಿತವಳಿಗೆ
ಕಣ್ತುಂಬಿದ ನೀರು
ಆತ್ಮಶುದ್ದೀಕರಣದ ಮೊದಲು ಮೆಟ್ಟಿಲು

ಒಳಗೊಳಗೇ ವ್ಯಥೆ
ಆ ರಾಡಿಮಣ್ಣು ಈ ನೀರಿನಲಿ ತೊಳೆಸುವದಾ?
ಅಪವಿತ್ರ ಪವಿತ್ರ
ಪವಿತ್ರ ಅಪವಿತ್ರ-ಪವಿತ್ರ.

ಸುಳಿಸುಳಿಯೊಳಗೆ ಹರಿದಾಡಿ ಹೊರಳಾಡಿ
ಅಪ್ಪಿ ಸ್ಪರ್ಶಿಸಿ ಬಂದವರಿಗೆ
ರಮಿಸಿ ಕೈಹಿಡಿವ ಪಾವಣಿ ದಯಾಮಯಿ

ದಿಲ್ಲಿ ನೆಲಕ್ಕಿಳಿದು ಬಿಳ್ಕೊಂಡ
ಕ್ಯಾಮಿಲಾಳ ಬಿಗಿಯಪ್ಪುಗೆ
ಮನದೊಳಗೆ ಆರ್ಧ್ರತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಧವತಿ
Next post ಮಾತು – ಮೌನ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys